ದಕ್ಷಿಣ ಕನ್ನಡ ದ್ರಾವಿಡ ಬ್ರಾಹ್ಮಣ ಸಭಾ, (ರಿ) ಧಾರವಾಡ

ಸ್ಥಾಪನೆ : ೧೯೯೬
ದಕ್ಷಿಣ ಕನ್ನಡದ ದ್ರಾವಿಡ ಬ್ರಾಹ್ಮಣ ಸಂಘಟನೆಯನ್ನು  ಬಲಪಡಿಸಿಕೊಳ್ಳಲು, ಪರಂಪರಾಗತವಾಗಿ ಬಂದ ಆಚಾರಗಳನ್ನು ರಕ್ಷಿಸಿಕೊಳ್ಳಲು, ಸಾಮಾಜಿಕವಾಗಿ ತಮ್ಮ ಅಸ್ತಿತ್ವವನ್ನು ಉಳಿಸಿ ಬೆಳೆಸಲು,  ಬ್ರಾಹ್ಮಣ ಸಮಾಜದ ಆರ್ಥಿಕ, ಕೌಟುಂಬಿಕ, ಧಾರ್ಮಿಕ, ಪಾರಮಾರ್ಥಿಕ ಶ್ರೇಯೋಭಿವೃದ್ಧಿ ಮೊದಲಾದ ಘನ ಉದ್ದೇಶಗಳನ್ನಿಟ್ಟುಕೊಂಡು ದಿನಾಂಕ ೨೨.೧೦.೧೯೯೬ ರಲ್ಲಿ ಧಾರವಾಡದಲ್ಲಿ ಈ ಸಂಘಟನೆಯನ್ನು ಆರಂಭಿಸಲಾಯಿತು.
ಇವರು ಧಾರವಾಡದ ಹನುಮಂತನಗರದಲ್ಲಿ ಶ್ರೀಕೃಷ್ಣ, ಶ್ರೀ ಗಣೇಶ, ಶ್ರೀ ರಾಘವೇಂದ್ರ ಸ್ವಾಮಿಗಳ ದೇವಾಲಯ ಸಮುಚ್ಚಯವನ್ನು ಸರ್ವರ ಸಹಕಾರದೊಂದಿಗೆ ನಿರ್ಮಿಸಿರುತ್ತಾರೆ. ಹಾಗೂ ತಮ್ಮೆಲ್ಲಾ ಕಾರ್ಯಕ್ರಮಗಳ ಹಾಗೂ ಸಂಘಟನೆಯ ಕೇಂದ್ರ ಈ ದೇವಾಲಯಗಳ ಸಮುಚ್ಚಯ ಆಗಿರುತ್ತದೆ.
ಈ ಪ್ರದೇಶದಲ್ಲಿ ನಮ್ಮವರ ಸುಮಾರು ೧೫೦ ರಷ್ಟು ಮನೆಗಳು ಇದ್ದು, ಎಲ್ಲರೂ ಈ ಸಭಾದ ಸದಸ್ಯರು ಆಗಿರುತ್ತಾರೆ.
ನಡೆಸುವ ಕಾರ್ಯಚಟುವಟಿಕೆಗಳು :-

ಎಲ್ಲಾ ಕಾರ್ಯಕ್ರಮಗಳು ಪ್ರತೀವರ್ಷ ದೇವಾಲಯ ಸಮುಚ್ಚಯದಲ್ಲಿಯೇ ನಡೆಯುತ್ತಿದ್ದು ಅದರ ವಿವರ ಹೀಗಿದೆ.

  • ಸೌರಮಾನ ಯುಗಾದಿ (ವಿಷು):- ಭಗಿನಿಯರಿಂದ ಲಕ್ಷ್ಮೀ ಶೋಬಾನೆ, ರಂಗಪೂಜೆ, ದೀಪಾರಾಧನೆ, ಪಾಲಕಿ ಉತ್ಸವ, ಕಣಿ‌ಅಲಂಕಾರ.
  • ದೇವತಾಪ್ರತಿಷ್ಠಾಪನೆಯ ವರ್ಧಂತಿ.
  • ರಾಘವೇಂದ್ರ ಸ್ವಾಮಿಗಳ ಆರಾಧನೆ.
  • ಗಣೇಶ ಚತುರ್ಥೀ ಆಚರಣೆ.
  • ಸೌರ ಋಗುಪಾಕರ್ಮ.
  • ಶ್ರೀಕೃಷ್ಣಜನ್ಮಾಷ್ಟಮಿ.
  • ಸಭಾದ ವಾರ್ಷಿಕೋತ್ಸವ. ಇದರಲ್ಲಿ ಪ್ರತೀ ವರ್ಷ ಹಿರಿಯರಿಗೆ ಸನ್ಮಾನ ಮೊದಲಾದ ಕಾರ್ಯಕ್ರಮ.
  • ವಿಜಯದಶಮೀ ಆಚರಣೆ ಹಾಗೂ ದುರ್ಗಾಪೂಜೆ
  • ಕಾರ್ತಿಕ ಹುಣ್ಣಮೆಯಂದು ಕಾರ್ತಿಕ ದೀಪೋತ್ಸವ, ತುಳಸೀ ಪೂಜೆ ಇತ್ಯಾದಿ.
  • ಪುರಂದರದಾಸರ ಆರಾಧನೆ. ಅಂದು ಸಂಗೀತೋತ್ಸವ, ಎಲ್ಲರಿಗೂ ಅವಕಾಶಗಳು.
  • ಮಧ್ವನವಮೀ ಕಾರ್ಯಕ್ರಮ.
  • ಶ್ರೀ ವಾದಿರಾಜಸ್ವಾಮಿ ಆರಾಧನೆ, ವಾದಿರಾಜ ವಿರಚಿತ ಲಕ್ಷ್ಮೀಶೋಭಾನೆ ಹಾಗೂ ಇನ್ನಿತರ ಕೃತಿಗಳ ಭಜನಾ ಕಾರ್ಯಕ್ರಮ.
  • ಶ್ರೀರಾಮನವಮಿಯಂದು ತೊಟ್ಟಿಲೋತ್ಸವ ಶ್ರೀರಾಮ ಭಜನೆ.
  • “ಸೌಹಾರ್ದ” ಎನ್ನುವ ಪತ್ರಿಕೆಯ ಬಿಡುಗಡೆ.

ಇವಿಷ್ಟೇ ಅಲ್ಲದೆ,

  • ಪ್ರತೀ ಹುಣ್ಣಿಮೆಯಂದು ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಅಂದು ಲಕ್ಷ್ಮೀಶೋಭಾನೆ ಕಾರ್ಯಕ್ರಮ.
  • ಪ್ರತೀ ವಾರ ವಿಷ್ಣುಸಹಸ್ರನಾಮ ಪಾರಾಯಣ.
  • ಪ್ರತೀ ಸಂಕಷ್ಟಿಯಂದು ಸಾಮೂಹಿಕ ಮಹಾಗಣಪತಿ ಹೋಮ.

ಮೊದಲಾದ ಕಾರ್ಯಕ್ರಮಗಳನ್ನು ಸರ್ವರ ಸಹಕಾರದೊಂದಿಗೆ ಯಶಸ್ವಿಯಾಗಿ ನಡೆಸಿಕೊಂಡು ಬರಲಾಗುತ್ತಿದೆ.
ಪ್ರಸ್ತುತ ಕಾರ್ಯಕಾರೀ ಸಮಿತಿ :

ಅಧ್ಯಕ್ಷರು                  :    ಶ್ರೀ ಟಿ. ಕೃಷ್ಣಯ್ಯ ಪುರಾಣಿಕ, “ಶ್ರೀ ಕೃಷ್ಣ ನಿವಾಸ”, ಸಾರಸ್ವತಪುರ, ಧಾರವಾಡ,  ದೂ – ೨೭೪೭೭೧೬ (೦೮೩೬)
ಉಪಾಧ್ಯಕ್ಷರು             :    ಶ್ರೀ ಗೋಪೀನಾಥ ಕಿದಿಯೂರ, ನ್ಯಾಯವಾದಿ, ಗಾಂಧಿನಗರ, ಧಾರವಾಡ.  ದೂ – ೨೪೬೯೬೧೩
ಗೌರವ ಕಾರ್ಯದರ್ಶಿ     :    ಶ್ರೀ ವೆಂಕಟರಾಜ ಉಡುಪಿ, ಶ್ರೀನಗರ, ಧಾರವಾಡ, ೫೮೦೦೩,  ದೂ – ೨೭೭೨೦೯೯
ಸಹಕರ್ಯದರ್ಶಿ           :    ಶ್ರೀ ಏ.ಟಿ. ಆಚಾರ್ಯ, ಗಲಗಲಿ ನರ್ಸಿಂಗ್ ಹೋಮ್, ಧಾರವಾಡ,  ದೂ – ೨೭೭೦೪೫೩
ಕೋಶಾಧ್ಯಕ್ಷರು           :     ಶ್ರೀ ಕೆ.ಎಲ್. ರಾವ್, ನಿವೃತ್ತ ಎಲ್.ಐ.ಸಿ. ಅಧಿಕಾರಿ ಧಾರವಾಡ,  ದೂ – ೨೭೭೪೮೬೯
ಸಹಕೋಶಾಧ್ಯಕ್ಷರು       :     ಶ್ರೀ ಕೆ.ಎಸ್.ಎನ್.ಉರಾಳ, ಕೃಷ್ಣಕುಂಜ, ಕಲ್ಯಾಣನಗರ, ಧಾರವಾಡ-೭,  ದೂ – ೨೭೯೬೫೪೩

ಸಮಿತಿ ಸದಸ್ಯರು :-
ಶ್ರೀ ಅನಂತ ಪದ್ಮನಾಭ ಭಟ್ಟ
ಶ್ರೀ ಎ.ಕೆ. ಭಟ್
ಶ್ರೀ ಎ.ಜಿ. ರಾವ್
ಶ್ರೀ ಎಮ್. ಸುಬ್ರಹ್ಮಣ್ಯ
ಶ್ರೀ ಕೆ. ಶ್ರೀಪತಿ ಭಟ್
ಶ್ರೀ ಎಸ್.ಎ. ಮಯ್ಯ
ಶ್ರೀ ನಾಗಭೂಷಣ ಕೃಷ್ಣ ಉಪಾಧ್ಯ
ಶ್ರೀ ಅನಂತರಾಮ ಆಚಾರ್ಯ

Leave a Reply

Your email address will not be published.