ಶ್ರೀನುಡಿ – ಶ್ರೀ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ, ಶ್ರೀ ಕೃಷ್ಣಾಪುರ ಮಠ, ಉಡುಪಿ
ಧರ್ಮಸಂಸ್ಕೃತಿಯ ಬಗೆಗೆ ಜಾಗೃತಿ, ನಮ್ಮ ಪರಂಪರೆಗಳ ಇತಿಹಾಸ, ಅನೂಚಾನವಾಗಿ ಪಾಲಿಸಿಕೊಂಡು ಬಂದಿರುವ ನಮ್ಮ ಅಚಾರ ವಿಚಾರಗಳು, ಅಧ್ಯಾತ್ಮಿಕ ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಸೇವೆಗೈದ ಮಹನೀಯರ ಚರಿತ್ರೆ ಮತ್ತು ಮೌಲ್ಯಯುಕ್ತ ಕೃತಿಗಳ ಪ್ರಚಾರ ಇವೇ ಮೊದಲಾದ ವಿಷಯಗಳ ಬಗೆಗೆ ಜಗತ್ತಿನಾದ್ಯಂತ ಇರುವ ತುಳು ಬ್ರಾಹ್ಮಣ ಸಮಾಜಕ್ಕೆ ಅರಿವನ್ನು ಮೂಡಿಸುವ ತಮ್ಮ ಪ್ರಯತ್ನವು ಶ್ಲಾಘನೀಯವಾಗಿದೆ. ಅಂತರ್ಜಾಲ ವ್ಯವಸ್ಥೆಯ ಮೂಲಕ ಹಮ್ಮಿಕೊಂಡ ತಮ್ಮ ಕಾರ್ಯ ವೈಖರಿಯು ಯಶಸ್ವಿಯಾಗಲಿ, ತುಳು ವಿಪ್ರ ಬಾಂಧವರು ಅವುಗಳ ಪ್ರಯೋಜನವನ್ನು ಪಡೆಯುವಂತಾಗಲಿ ಮತ್ತು ಭಗವತ್ಪ್ರಜ್ಞೆಯನ್ನು ಮೂಡಿಸಿಕೊಳ್ಳುವಂತಾಗಲಿ ಎ೦ದು ನಾವು ಆಶಿಸುತ್ತೇವೆ.
ಇತ್ಯನೇಕಶ್ರೀಮನ್ನಾರಯಣ ಸ್ಮರಣೆಗಳು,
ಶ್ರೀ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ, ಶ್ರೀ ಕೃಷ್ಣಾಪುರ ಮಠ, ಉಡುಪಿ
ಶ್ರೀ ಕೃಷ್ಣಾಪುರ ಮಠ,
ರಥಬೀದಿ, ಉಡುಪಿ.