ನವರಾತ್ರಿ – ಆಯುಧ ಪೂಜಾ

ಮಹಾನವಮಿಯಂದು  ತಪ್ಪಿದರೆ  ವಿಜಯದಶಮಿಯಂದು  ಆಯುಧಪೂಜೆಯನ್ನು  ಮಾಡಬೇಕು. ಕಾರು, ಸ್ಕೂಟರ್ ,ಬಂಡಿ, ಮುಂತಾದ  ವಾಹನಗಳು , ಬೃಹತ್ ಯಂತ್ರಗಳು  ಮತ್ತು  ಕೋವಿ, ಖಡ್ಗ  ಮುಂತಾದವುಗಳೆಲ್ಲಾ ಆಯುಧ  ಪೂಜೆಯ  ಪ್ರತೀಕಗಳು.  ಇವುಗಳನ್ನೆಲ್ಲಾ  ತೊಳೆದು  ಶುದ್ಧಗೊಳಿಸಿ  ಹೂವು ,ಬಾಳೆಕಂಬ, ಗಂಧಗಳಿಂದ  ಅಲಂಕರಿಸಿ  ಊದುಬತ್ತಿ  ಆರತಿ  ಹಚ್ಚಿ  ಪೂಜಿಸುವುದು. ಯಂತ್ರದೇವತೆಗಳಾದ  ದುರ್ಗೆ-ನರಸಿಂಹರನ್ನು  ಇಲ್ಲಿ  ಪೂಜಿಸುವುದು.

ದುರ್ಗಾಂತರ್ಗತ  ಶ್ರೀ ಲಕ್ಷ್ಮೀನರಸಿಂಹಪ್ರೀತ್ಯರ್ಥಂ  ಯಂತ್ರಪೂಜಾಂ  ಕರಿಷ್ಯೇ  |

      ಯಂತ್ರದೇವತಾಯೈ  ದುರ್ಗಾಯೈ  ನಮ: |

      ದುರ್ಗೇ  ದೇವಿ  ಸಮಾಗಚ್ಛ  ಸಾನ್ನಿಧ್ಯಮಿಹ  ಕಲ್ಪಯ |

      ಪೂಜಾಮಿಮಾಂ  ಗೃಹಾಣ  ತ್ವಂ  ಅಷ್ಟಭಿ:  ಶಕ್ತಿಭಿ: ಸಹ |

      ಯಂತ್ರದೇವತಾಂ  ದುರ್ಗಾಮಾವಾಹಯಾಮಿ |

      ಯಂತ್ರದೇವಾತೈ  ನಮ: |  ಧ್ಯಾನಾವಾಹನಾದಿ  ಷೋಡಶೋಪಚಾರ ಪೂಜಾ : ಸಮರ್ಪಯಾಮಿ |

ನೈವೇದ್ಯ  ಮಂಗಳಾರತಿಯಾದ  ಮೇಲೆ  ದೃಷ್ಟಿ  ತೆಗೆಯಬೇಕು. ಬೂದುಕುಂಬಳ  ಅಥವಾ  ತೆಂಗಿನಕಾಯಿಯಲ್ಲಿ ಕರ್ಪುರದೀಪವನ್ನು  ಹಚ್ಚಿ  ವಾಹನಾದಿಗಳಿಗೆ  ಒಂದು  ಸುತ್ತು  ತಂದು  ನೆಲಕ್ಕೆ  ಹೊಡೆದು  ಒಡೆಯಬೇಕು. ಈ  ಸಮಯದಲ್ಲಿ  ಸುದರ್ಶನ  ಮಂತ್ರವನ್ನು  ಅಥವಾ  ‘ಚಕ್ರರಾಜಾಯ  ನಮ:  ಅಘೋರಾಯ ‘ ಎಂದು    ಪಠಿಸಬೇಕು.

               ಶೂಲೇನ  ಪಾಹಿ ನೋ ದೇವಿ  ಷಾಹಿ  ಖಡ್ಗೇನ     ಚಾಂಬಿಕೇ   

               ಘಂಟಾಸ್ವನೇನ  ನ:  ಪಾಹಿ  ಚಾಪೆಜ್ಯಾನಿ:ಸ್ವನೇನ  ಚ ||  

               ಯಂತ್ರದೇವತಾಯೈ  ನಮ: |  ಪ್ರಾರ್ಥನಾಂ  ಸಮರ್ಪಯಾಮಿ |

ಅನೇನ  ಯಂತ್ರಪೂಜಾ (ಆಯುಧಪೂಜಾ) ಕರಣೇನ 

ಯಂತ್ರದೇವತಾಂತರ್ಗತ  ಲಕ್ಷ್ಮೀನರಸಿಂಹಾತ್ಮಕ : 

 ಮಧ್ವಪತಿಗೋಪಾಲಕೃಷ್ಣ:  ಪ್ರೀಯತಾಂ |

 ವಾಹನಪೂಜೆಯಾದ  ಮೇಲೆ  ವಿಪ್ರರಿಗೆ  ದಕ್ಷಿಣೆಯಿತ್ತು  ವಾಹನಗಳ  ಚಕ್ರಗಳಿಗೆ  ನಿಂಬೆಹಣ್ಣನ್ನು  ಇಟ್ಟು ವಾಹನಗಳನ್ನು  ಚಾಲಿಸಬೇಕು.

ಲೇಖಕರು:
ಡಾ । ಸತ್ಯನಾರಾಯಣ ಆಚಾರ್ಯ
ಪ್ರಾಂಶುಪಾಲರು ,
ಪೂರ್ಣ ಪ್ರಜ್ಞ ವಿದ್ಯಾಪೀಠ
ಬೆಂಗಳೂರು

ಸಂಗ್ರಹ:
ಸುಧಾ ಭಟ್ಟ್ , ಉಡುಪಿ

ಟೈಪಿಂಗ್:

ಸುಧಾ ಭಟ್ಟ್ , ಉಡುಪಿ

Leave a Reply

Your email address will not be published.