ನವರಾತ್ರಿ – ಸರಸ್ವತೀ ಪೂಜೆ 

ಸರಸ್ವತೀ ಪೂಜೆ 

ನವರಾತ್ರಿಯ  ಮಧ್ಯೆ  ಬರುವ  ಮೂಲ  ನಕ್ಷತ್ರದಂದು  ಸರಸ್ವತೀ ಪೂಜೆಯ  ಆರಂಭ . ಶ್ರವಣನಕ್ಷತ್ರದಂದು  ವಿಸರ್ಜನೆ. 

‘ಮೂಲೇನಾವಾಹಯೇದ್  ದೇವೀಂ  ಶ್ರವಣೇನ  ವಿಸರ್ಜಯೇತ್ ‘ 

ಮೂಲ  ಶ್ರವಣ ನಕ್ಷತ್ರಗಳು  ಮಧ್ಯಾಹ್ನ ವ್ಯಾಪ್ತಿಯಾಗಿರಬೇಕು. 

ಮೂಲನಕ್ಷತ್ರದ  ದಿನದಂದು  ದೇವಪೂಜೆಯಾದ  ಮೇಲೆ  ದೇವರ  ಸನಿಹದಲ್ಲಿ  ಮಣೆ-ವ್ಯಾಸಪೀಠದಂತಹ  ಪೀಠದಲ್ಲಿ 

ಪುಸ್ತಕಗಳನ್ನು  ಪೇರಿಸಿ  ಇಡಬೇಕು. ಗೀತಾ  ಪುಸ್ತಕ -ವೇದಪುಸ್ತಕಗಳನ್ನಲ್ಲದೆ  ಪ್ರಾಚೀನ  ತಾಡವಾಲೆಗಳಿದ್ದಲ್ಲಿ   ಅವನ್ನೂ

ಶುದ್ಧಿಗೊಳಿಸಿ  ಪೀಠದಲ್ಲಿಡಬೇಕು. ವೀಣೆ , ಅಕ್ಷಮಾಲೆಗಳನ್ನು  ಸನಿಹದಲ್ಲಿಟ್ಟು  ವ್ಯಾಸಪ್ರತಿಷ್ಠೆ  ಮಾಡಿ  ಶಾರದೆಯನ್ನು 

ಪೂಜಿಸಬೇಕು.  ಪುಸ್ತಕಗಳನ್ನು   ಪುಷ್ಪಾಕ್ಷತೆಗಳಿಂದ  ಅಲಂಕರಿಸಿ –

        ಶಾರದಾ  ಶಾರದಾಂಭೋಜವದನಾ  ವದನಾಂಬುಜೇ  |

        ಸರ್ವದಾ  ಸರ್ವದಾಸ್ಮಾಕಂ  ಸನ್ನಿದ್ಧಿಂ  ಸನ್ನಿದ್ಧಿಂ  ಕ್ರಿಯಾತ್ |

       ನಮ: ಶ್ರೀ ಭುವನಮಾತ:  ಸಕಲವಾಂಙ್ಮಯರೂಪೇ  ಅತ್ರಾಗಚ್ಛಗಚ್ಛ  ಆವಾಹಯಾಮಿ 

ಎಂದು ಹೇಳಿ  ಪುಷ್ಪ  ಹಾಕಿ  ವ್ಯಾಸದೇವನನ್ನೂ  ಸರಸ್ವತೀ ದೇವಿಯನ್ನೂ  ಪುಸ್ತಕದಲ್ಲಿ  ಆವಾಹಿಸಬೇಕು. 

ಪಂಚಕಜ್ಜಾಯವನ್ನು  ನಿವೇದಿಸಿ  ದೇವರಿಗೆ  ಮಾಡಿದ  ಆರತಿಯನ್ನು  ಪುಸ್ತಕಗಳಿಗೂ  ಮಾಡಬೇಕು. 

     ವ್ಯಾಸಾಯ  ಭವನಾಶಾಯ  ಶ್ರೀಶಾಯ  ಗುಣರಾಶಯೇ |

    ಹೃದ್ಯಾಯ  ಶುದ್ಧವಿದ್ಯಾಯ  ಮಧ್ವಾಯ  ಚ  ನಮೋ  ನಮ: ||

    ನಮಸ್ತೇ  ಶಾರದೇ  ದೇವಿ  ಕಾಶ್ಮೀರಪುರವಾಸಿನಿ  |

    ತ್ವಾಮಹಂ  ಪ್ರಾರ್ಥಯೇ  ನಿತ್ಯಂ  ವಿದ್ಯಾಂ ಬುದ್ಧಿಂ  ಚ  ದೇಹಿ  ಮೇ ||

ಹೀಗೆ  ಪ್ರಾರ್ಥಿಸಿ  ಕೃಷ್ಣಾ ರ್ಪಣವೆನ್ನಬೇಕು. 

ಸಪ್ತಮೀ  ಅಥವಾ  ಅಷ್ಟಮಿಯಂದು  ಮೂಲನಕ್ಷತ್ರವಿರುತ್ತದೆ.  ಸಾಮಾನ್ಯವಾಗಿ  ವಿಜಯದಶಮಿಯಂದು  ಶ್ರವಣವಿರುತ್ತದೆ. 

ಈ  ದಿನ  ಮತ್ತೆ  ಶಾರದಾ ಪೂಜೆ  ಮಾಡಿ  ಶಾರದಾ ವಿಸರ್ಜನೆ  ಮಾಡಬೇಕು. 

                          ಗಚ್ಛ  ಗಚ್ಛ  ಸುರಶ್ರೇಷ್ಠೇ   ಸ್ವಸ್ಥಾನಂ  ಪ್ರಮದೋತ್ತಮೇ |

                          ಯತ್ರ  ಬ್ರಹ್ಮಾ  ಚ  ವಾಯುಶ್ಚ  ತತ್ರ  ಗಚ್ಛ  ಸರಸ್ವತಿ |

ಶಾರದಾಪ್ರತಿಷ್ಠೆಯಾದಂದಿನಿಂದ  ಇಂದಿನ  ತನಕ  ಅನಧ್ಯಯನ. ವೇದ-ವೇದಾಂತಗಳ  ಪಾಠ  ಮಾಡುವಂತಿಲ್ಲ . ವಿಜಯದಶಮಿಯಂದು  ಶಾರಾದಾವಿಸರ್ಜನೆಯಾದ  ಮೇಲೆ  ಶಾಂತಿಪಾಠದೊಂದಿಗೆ  ಅಧ್ಯಯನವನ್ನು  ಆರಂಭಿಸಬೇಕು. ಈ  ದಿನ  ನಾಲ್ಕಕ್ಷರವನ್ನಾದರೂ  ಬರೆಯುವ  ಪದ್ಧತಿಯಿದೆ. 

ಶಾಂತಿ ಪಾಠ – ಗುರುಗಳ  ಮುಂದೆ  ಅಥವಾ  ದೇವರ  ಮುಂದೆ  ಕೊಕ್ಕರೆ  ಕುಳಿತು ಕೊಂಡು ( ಪಾದತಲಮಾತ್ರ  ನೆಲಕ್ಕೆ  ತಾಗುವಂತೆ  ಕುಳಿತುಕೊಂಡು ) ‘ಶಂ ನೋ ಮಿತ್ರ: ‘ ಮತ್ತು  ‘ಸಹ  ನಾಮವತು‘  ಮಂತ್ರಗಳನ್ನು  ಹೇಳಬೇಕು. ತಿಳಿದವರು ನಾಲ್ಕು  ವೇದದ  ಶಾಂತಿಮಂತ್ರಗಳನ್ನು  ಪಠಿಸಿ  ಸರಿಯಾಗಿ  ಕುಳಿತು  ಗ್ರಂಥದ  ಆರಂಭದ  ವಿಷಯಗಳನ್ನು  ಪಠಿಸಬೇಕು. 

ಇಲ್ಲಿ  ಒಂದು  ಶಾಂತಿಮಂತ್ರವನ್ನು  ಕೊಡಲಾಗಿದೆ. 

             ಸಹ  ನಾಮವತು | ಸಹ  ನೌ  ಭುನಕ್ತು | ಸಹ  ವೀರ್ಯಂ  ಕರವಾ 

             ವಹೈ |  ತೇಜಸ್ವಿ  ನಾವಧೀತಮಸ್ತು  ಮಾ  ವಿದ್ವಿಷಾವಹೈ ||

             ಓಂ  ಶಾಂತಿ: ಶಾಂತಿ: ಶಾಂತಿ: ||

            ನಾರಾಯಣಂ  ಗುಣೈ :  ಸರ್ವೈ ರುದೀರ್ಣಂ  ದೋಷವರ್ಜಿತಮ್ |

            ಜ್ಞೇಯಂ  ಗಮ್ಯಂ  ಗುರೂಂಶ್ಚಾಪಿ  ನತ್ವಾ  ಸೂತ್ರಾರ್ಥ  ಉಚ್ಯತೇ ||

           ಓಂ  ಅಥಾತೋ  ಬ್ರಹ್ಮಜಿಜ್ಞಾಸಾ  ಓಂ  ||

ಲೇಖಕರು:
ಡಾ । ಸತ್ಯನಾರಾಯಣ ಆಚಾರ್ಯ
ಪ್ರಾಂಶುಪಾಲರು ,
ಪೂರ್ಣ ಪ್ರಜ್ಞ ವಿದ್ಯಾಪೀಠ
ಬೆಂಗಳೂರು

ಸಂಗ್ರಹ:
ಸುಧಾ ಭಟ್ಟ್ , ಉಡುಪಿ

ಟೈಪಿಂಗ್:

ಸುಧಾ ಭಟ್ಟ್ , ಉಡುಪಿ

Leave a Reply

Your email address will not be published.