ವಿಜಯ ದಶಮೀ, ಮಧ್ವ  ಜಯಂತೀ

ಶುಂಭ-ನಿಶುಂಭಾದಿ  ಸಂಹಾರದಿಂದ  ಖುಷಿಗೊಂಡ  ದೇವತೆಗಳು  ವಿಜಯೋತ್ಸವವನ್ನಾಚರಿಸಿದ  ದಶಮೀ  ಇದು. ಪಾಂಡವರು  ಅಜ್ಞಾತವಾಸವನ್ನು  ಮುಗಿಸಿ  ಶಮೀವೃಕ್ಷದಲ್ಲಿದ್ದ  ಆಯುಧವನ್ನು  ತೆಗೆದು  ಪೂಜಿಸಿದ  ದಿನ. ಇಂದು  ಶಮೀ ಪೂಜೆಯು  ವಿಹಿತ. ಶಮೀವೃಕ್ಷಕ್ಕೆ  ನೀರೆರೆದು 

       ಅಮಂಗಲಾನಾಂ  ಶಮನೀಂ  ಶಮನೀಂ  ದುಷ್ಕೃತಸ್ಯ  ಚ |

       ದು :ಖ ಪ್ರಣಾಶಿನೀಂ  ಧನ್ಯಾಮ್ ಪ್ರಪದ್ಯೇ~ಹಂ  ಶಮೀಂ  ಶುಭಾಮ್ ||

      ಶಮೀ  ಶಮಯತೇ  ಪಾಪಂ  ಶಮೀ  ಶತ್ರುವಿನಾಶಿನೀ |

      ಅರ್ಜುನಸ್ಯ  ಧನುರ್ಧಾರೀ  ರಾಮಸ್ಯ  ಪ್ರಿಯದರ್ಶಿನೀ ||

      ಶಮೀ  ಕಮಲಪತ್ರಾಕ್ಷಿ  ಶಮೀ  ಕಂಟಕಧಾರಿಣೀ (ದಾರಿಣೀ) |

      ಅಪನೋದಯ  ಮೇ  ಪಾಪಂ  ಆಯು:  ಪ್ರಾಣಾಂ ಶ್ಚ  ರಕ್ಷತು ||

‘ಶಮೀದೇವಿಯು  ಅಮಂಗಳ  ನಾಶಿನಿ.  ಪಾಪವಿನಾಶಿನಿ. ದು:ಖ ನಿರಾಸಿನಿ. ಮಂಗಳ ರೂಪಿಣಿ  ಶಮಿಯನ್ನು  ಶರಣು ಹೊಂದುವೆ.  ಶಮಿಯು ಪಾಪಶಮನಿ. ಶತ್ರುನಾಶಿನಿ. ಅರ್ಜುನನ  ಧನುಸ್ಸನ್ನು  ಧರಿಸಿದವಳು. ರಾಮನಿಗೆ  ಪ್ರಿಯಕರಳು. ಕಮಲಾಯತಾಕ್ಷಿ  ಶಮೀ  ದೇವಿಯೇ,  ನೀನು  ಮುಳ್ಳುಧರಿಸಿದ್ದೂ  ಕಂಟಕಗಳನ್ನು  ಕೀಳುವವಳು. ನಮ್ಮ  ಪಾಪಗಳನ್ನು  ದೂರೀಕರಿಸು. ಇಂದ್ರಿಯಗಳನ್ನು  ಗಟ್ಟಿಯಾಗಿಟ್ಟು  ಆಯುಷ್ಯವನ್ನು  ನೀಡು. ಸಂರಕ್ಷಿಸು’.   

ಹೀಗೆಂದು  ಪ್ರಾರ್ಥಿಸಿ  ನಮಿಸುವುದು. ಶಮೀಪತ್ರೆಯನ್ನು  ಹಿರಿಯರಿಗಿತ್ತು  ನಮಿಸುವುದು. ಹಿರಿಯರಿಂದಲೂ  ಶಮೀಯನ್ನು  ಪಡೆದು  ಆಶೀರ್ವಾದವನ್ನು  ಪಡೆಯಬೇಕು. 

ಶಮೀವೃಕ್ಪ  ಸನಿಹದಲ್ಲಿ  ಇಲ್ಲವಾದರೆ  ಶಮೀಪತ್ರೆಯನ್ನು  ಒಂದು  ತಟ್ಟೆಯಲ್ಲಿಟ್ಟು  ಅಲ್ಲಿಯೇ  ಶಮೀಪೂಜೆ  ಮಾಡುವುದು.

ಅಕ್ಷರಾರಂಭ, ಅಧ್ಯಯನಾರಂಭ  ಮುಂತಾದವುಗಳಿಗೆ  ವಿಜಯದಶಮಿಯು  ಬಹಳ  ಪ್ರಶಸ್ತಕಾಲ.  ಈ  ದಿನವಾದರೆ 

ತಾರಾನುಕೂಲ್ಯ  ಮುಂತಾದ  ಮುಹೂರ್ತಾಂ ಶ ಗಳನ್ನು  ಚಿಂತಿಸಬೇಕಾಗಿಲ್ಲ.

ಸಾಯಂಕಾಲದ  ಹೊತ್ತು  ಮೆರವಣಿಗೆಯಲ್ಲಿ  ಗ್ರಾಮಸ್ಥರೆಲ್ಲ  ಶಮೀತಟದಲ್ಲಿ  ಸೇರಿ  ವೃಕ್ಷರಾಜ  ಶಮಿಯನ್ನು ಪೂಜಿಸುವ  ಪದ್ಧತಿ  ಕೆಲವೆಡೆ  ಇದೆ.

ಶಮೀಪೂಜೆಯಾದ  ಮೇಲೆ  ‘ಸೀಮೋಲ್ಲಂಘನ‘   ಎಂಬ  ಹೆಸರಿನ  ಗ್ರಾಮದ  ಗಡಿದಾಟಿ  ಹೋಗುವ  ಪದ್ಧತಿ  ಮತ್ತೆ ಕೆಲವೆಡೆ.

ಮಧ್ವ  ಜಯಂತೀ

ವಿಜಯದಶಮಿಯಂದೇ  ವಾಯುದೇವರು  ಮಧ್ವರಾಗಿ  ಅವತಾರಮಾಡಿದರು.

ಸ್ಕಾಂ ದೇ   ಗೋಭಿಲ:- 

   ಶು ಕ್ಲಾಶ್ವಿನದಶಮ್ಯಾಂ    ಜಯಂತೀ  ಜಗದಾತ್ಮನ: |

        ಪೂರ್ಣ ಭೋಧಮುನೇ:  ಕಾರ್ಯಾ  ಕಾಮಿತಾರ್ಥಪ್ರದಾಯಿನೀ |

        ಸಾ  ಚ  ಸೂರ್ಯೋದಯೇ  ಗ್ರಾಹ್ಯಾ  ಶ್ರೇಯಸ್ಕಾಮೇನ  ಸರ್ವದಾ ||

ಈ  ಪ್ರಮಾಣದಂತೆ  ಆಶ್ವಯುಜಮಾಸದ  ಶುಕ್ಲದಶಮೀ  ದಿನ  ಮಧ್ವಜಯಂತಿಯಾಗಿದೆ.  ಸೂರ್ಯೋದಯಕ್ಕೆ  ದಶಮಿಯಿರುವಂದೇ  ಈ  ಜಯಂತಿಯು  ಆಚರಣೀಯ.  ಇದರ  ಆಚರಣೆ  ಕಾಮಿತಾರ್ಥದಾಯಕವು.

ಇಂದು  ಮಧ್ಯಾಹ್ನ  ವಿಷ್ಣು ಪೂಜಾನಂತರ  ನೈರ್ಮಾಲ್ಯ ತುಳಸೀ ಮುಂತಾದುವನ್ನು  ಸಂಗ್ರಹಿಸಿ  ಕೊಂಡು  ಮುಖ್ಯ ಪ್ರಾಣ ಪ್ರತಿಮೆಯನ್ನು  ಪೀಠದಲ್ಲಿ  ಸ್ಥಾಪಿಸಿಕಂಡು. ಸಂಕಲ್ಪ –

 

       ಮಧ್ವಜಯಂತ್ಯಾಂ ಅಶ್ವಿನಶುಕ್ಲದಶಮ್ಯಾಂ  ಅಸ್ಮಾದಾದಿಗುರುಮಧ್ವಾಂತರ್ಗತ-

       ಶ್ರೀಗೋಪಾಲಕೃಷ್ಣ ಪ್ರೇರಣಾಯ  ಶ್ರೀಗೋಪಾಲಕೃಷ್ಣ ಪ್ರೀತ್ಯರ್ಥಂ 

ಅಸ್ಮದಾದಿ-ಗುರುಮಧ್ವ ಭಗವತ್ಪಾದ ಪೂಜಾಖ್ಯಾಂ ಕರ್ಮ  ಕರಿಷ್ಯೇ

ಗುರು ನಮಸ್ಕಾರ

        ಹಂ  ಹನುಮತೇ  ನಮ: | ಭಂ  ಭೀಮಾಯ  ನಮ: | ಅಂ  ಅಂಜನಾನಾಂ ದನಾಯ  ನಮ 😐 

ಜಂ  ಜಿತೇಂದ್ರಿಯಾಯ ನಮ: | ವಂ  ವಾನರಯೂ ಥಪಾಯ   ನಮ: | ರಂ  ರಾಮದೂತಾಯ  ನಮ: |

ಪಂ  ಪವನಾತ್ಮಜಾ‌ ನಮ: | ಮಂ  ಮಹಾಬಲಾಯ  ನಮ: | ಶ್ರೀಮದಾನಂದ ತೀರ್ಥಗುರುಭ್ಯೋ  ನಮ: |

ಪಾಪಪುರುಷ ನಿರಸನ, ತತ್ವನ್ಯಾಸ , ಮಾತೃಕಾನ್ಯಾಸಗಳನ್ನು  ಮಾಡಿಕೊಂಡು  ಆವಾಹನೆ  ಮಾಡಬೇಕು. 

ಅಸ್ಯ ಶ್ರೀ  ಪ್ರಾಣ ಮಂತ್ರಸ್ಯ  ಭೃಗು ಋಷಿ : |

ಪಂಕ್ತಿಶ್ಛಂದ:  ಪ್ರಾಣಾದಿಪಂಚರೂಪೀ ಶ್ರೀ ಮುಖ್ಯಪ್ರಾಣೋ  ದೇವತಾ | ಆವಾಹನೇ  ವಿನಿಯೋಗ 😐

       ಓಂ   ಪ್ರಾಣಾಯ  ಹೃದಯಾಯ  ನಮ: |

       ಅಪಾನಾಯ  ಶಿರಸೇ ಸ್ವಾಹಾ |       

        ವ್ಯಾನಾಯ  ಶಿಖಾಯೈ  ವಷಟ್ |        

        ಉದಾನಾಯ  ಕವಚಾಯ  ಹುಮ್ |        

        ಸಮಾನಾಯ  ಅಸ್ತ್ರಾಯ  ಫಟ್ |

         ಉದ್ಯದ್ರ ವಿಪ್ರಕರ ಸನ್ನಿಭಮಚ್ಯುತಾಂಕೇ

         ಸ್ವಾಸೀನಮಸ್ಯ  ನುತಿನಿತ್ಯವಚ : ಪ್ರವೃತ್ತಿಮ್ |

         ಧ್ಯಾಯೇದ್  ಗದಾಭಯಕರಂ  ಸುಕೃತಾಂಜಲಿಂ  ತಂ ಪ್ರಾಣಂ  ಯಥೇಷ್ಟತನುಮುನ್ನತಕರ್ಮಶಕ್ತಿಮ್  ||

         ಓಂ  ಪ್ರಾಣಾಯ  ನಮ: | ಅಪಾನಾಯ  ನಮ: | ವ್ಯಾನಾಯ  ನಮ: | ಉದಾನಾಯ  ನಮ: |

         ಸಮಾನಾಯ  ನಮ: | ಓಂ  ಮುಖ್ಯಪ್ರಾಣಂ  ಆವಾಹಯಾಮಿ | ಮಂ  ಮಧ್ವಾಯ  ನಮ: | 

          ಮಧ್ವಂ  ಆವಾಹಯಾಮಿ |

        ನವಾರ್ಕಕೋಟಿಸ್ಮಿತಸುಂದರಾಸ್ಯಂ

        ಸುವರ್ಣಕೌಪೀನಧೃತಂ  ಸುಸೌಮ್ಯಮ್ |

        ಪ್ರಭೋಧ ಮುದ್ರಾಭಯ ಪದ್ಮ ಹಸ್ತಂ

        ಪ್ರಣೌಮಿ  ವಿದ್ಯಾಧಿಗಮಾಯ  ಮಧ್ವಮ್ ||

ಹೀಗೆ  ಮಧ್ವರನ್ನು  ಧ್ಯಾನಿಸಿ 

ಪೂರ್ಣಪ್ರಜ್ಞಾಯ  ನಮ: |  ಅರ್ಘ್ಯಂ  ಸಮರ್ಪಯಾಮಿ |

ಜ್ಞಾನಧಾತ್ರೇ  ನಮ: | ಪಾದ್ಯಂ  ಸಮರ್ಪಯಾಮಿ |

ಮಧ್ವಾಯ  ನಮ: |  ಆಚಮನೀಯಂ  ಸಮರ್ಪಯಾಮಿ |

ಧ್ವಸ್ತದುರಾಗಮಾಯ  ನಮ:  ಮಧುಪರ್ಕಂ  ಸಮರ್ಪಯಾಮಿ |

ತತ್ವಜ್ಞಾಯ  ನಮ: | ಪುನರಾಚಮನೀಯಂ  ಸಮರ್ಪಯಾಮಿ |

ವೈಷ್ಣವಾ ಚಾರ್ಯಾಯ  ನಮ: | ಸ್ನಾನಂ  ಸಮರ್ಪಯಾಮಿ |

ವ್ಯಾಸಶಿಷ್ಯಾಯ  ನಮ: | ಕಾಷಾಯ ವಸ್ತ್ರಂ  ಸಮರ್ಪಯಾಮಿ |

ಯತೀಶ್ವರಾಯ  ನಮ: | ಗೋಪೀ ಖಂಡಂ  ಸಮರ್ಪಯಾಮಿ |

ಶುಭತೀರ್ಥಾಭಿಧಾಯ  ನಮ: | ವಿಷ್ಣ್ವ ರ್ಪಿತತುಲಸೀಂ ಸಮರ್ಪಯಾಮಿ |

ಜಿತಾಮಿತ್ರಾಯ  ನಮ: | ವಿಷ್ಣು ನಿವೇದಿತ  ಗಂಧಂ  ಸಮರ್ಪಯಾಮಿ |

ಜಿತೇಂದ್ರಿಯಾಯ  ನಮ: | ಧೂಪ-ದೀಪ -ನೈವೇದ್ಯಾದಿ  ಸಮರ್ಪಯಾಮಿ |

ಶ್ರೀ ಮದಾನಂದತೀರ್ಥ ಸನ್ನಾಮ್ನೇ  ನಮ: | ನೀರಾಜನಂ  ಸಮರ್ಪಯಾಮಿ |

ಪ್ರಾರ್ಥನಾ 

        ತ್ರಿಕೋಟಿ ಮೂರ್ತಿ ಸಂಯುಕ್ತ ಸ್ತ್ರೇತಾಯಾಂ   ರಾಕ್ಷಸಾಂತಕ: |

       ಹನುಮಾನಿತಿ  ವಿಖ್ಯಾತೋ  ರಾಮಕಾರ್ಯಧುರಂಧರ:||

       ಸ್ವವಾಯುರ್ಭಿಮಸೇನಸ್ಸನ್  ದ್ವಾಪರಾಂತೇ  ಕುರೂದ್ವಹ: |

       ಕೃಷ್ಣಂ  ಸಂಪೂಜಯಾಮಾಸ  ಹತ್ವಾ  ದುರ್ಯೋಧನಾದಿಕಾನ್ ||

       ದ್ವೈ ಪಾಯನಸ್ಯ  ಸೇವಾರ್ಥಂ  ಬದರ್ಯಾಂ  ತು  ಕಲೌ  ಯುಗೇ |

        ಯತಿರೂಪಧರೋ   ವಾಯುರ್ಭವಿಷ್ಯತಿ  ನ  ಸಂಶಯ: ||

 

       ಶ್ರೀರಾಮಂ   ಹನುಮತ್ಸೇವ್ಯಂ   ಶ್ರೀ ಕೃಷ್ಣಂ   ಭೀಮಸೇವಿತಮ್|

       ಶ್ರೀವ್ಯಾಸಂ   ಮಧ್ವ ಸಂಸೇವ್ಯಂ  ನಮಾಮಿ  ಜ್ಞಾನಸಿದ್ಧಯೇ ||

 ಹೀಗೆ  ಪ್ರಾರ್ಥಿಸಿ  ಪುಷ್ಪಾಂಜಲಿಯನ್ನರ್ಪಿಸಬೇಕು. 

ಅರ್ಘ್ಯಪ್ರದಾನ – 

ವೇದವತೀ   ಶುಭಾಂಕ ಸಂಸ್ಥಿತಾಯ  ದಿವ್ಯಾದ್ಭುತ ಬಾಲರೂಪಾಯ  ಶ್ರೀವಾಸುದೇವಾಯ  ತ್ರಿಲೋಕಗುರವೇ 

                       ಇದಮರ್ಘ್ಯಮಿದಮರ್ಘ್ಯಮಿದಮ ರ್ಘ್ಯಮ್|

ಎಂದು  ಅರ್ಘ್ಯವನ್ನಿತ್ತು  ಪ್ರದಕ್ಷಿಣೆ  ಬಂದು  ನಮಸ್ಕರಿಸಬೇಕು. 

                   ನಮಸ್ತೇ   ಪ್ರಾಣೇಶ  ಪ್ರಣತವಿಭವಾಯಾವನಿಮಗಾ: 

                   ಸಮ: ಸ್ವಾಮಿನ್  ರಾಮಪ್ರಿಯತಮ  ಹನುಮಾನ್  ಗುರುಗುಣ |

                   ನಮಸ್ತುಭ್ಯಂ  ಭೀಮ  ಪ್ರಬಲತಮ  ಕೃಷ್ಣೇಷ್ಟ  ಭಗವನ್

                   ನಮ: ಶ್ರೀ ಮನ್ಮಧ್ವ  ಪ್ರದಿಶ  ಸುದೃಶಂ  ನೋ  ಜಯಜಯ ||

ಹೀಗೆ  ಮಧ್ವರನ್ನು  ನಮಿಸಿ  ಕೃಷ್ಣಾರ್ಪಣವೆನ್ನಬೇಕು,.

ವಿಪ್ರರಿಗೆ  ಗೋಪಿಚಂದನ  ಯಜನೋಪವೀತಾದಿಗಳನ್ನು  ದಕ್ಷಿಣೆಯೊಂದಿಗೆ  ಮಧ್ವ  ಪ್ರೀತ್ಯರ್ಥ  ದಾನ  ಮಾಡಿ 

ಸಂತರ್ಪಣೆಯನ್ನು  ಮಾಡುವುದು  ಗುರುಪ್ರೀತಿಕರ.

ಲೇಖಕರು:
ಡಾ । ಸತ್ಯನಾರಾಯಣ ಆಚಾರ್ಯ
ಪ್ರಾಂಶುಪಾಲರು ,
ಪೂರ್ಣ ಪ್ರಜ್ಞ ವಿದ್ಯಾಪೀಠ
ಬೆಂಗಳೂರು

ಸಂಗ್ರಹ:
ಸುಧಾ ಭಟ್ಟ್ , ಉಡುಪಿ

ಟೈಪಿಂಗ್:

ಸುಧಾ ಭಟ್ಟ್ , ಉಡುಪಿ

Leave a Reply

Your email address will not be published.