ಕೊರಳ್ (ಕದಿರು) ಕಟ್ಟುವುದು    

ತುಳುನಾಡಿನ  ಕೃಷಿಕರ  ಹಬ್ಬವಿದು. ಅನಂತನ  ಚದುರ್ದಶಿಯಿಂದ  ಆರಂಭಿಸಿ  ದೀಪಾವಳಿಯ  ಒಳಗಾಗಿ  ಒಂದು 

ಶುಭದಿನದಂದು  ಕೊರಳ್ಕಟ್ಟುವ  ಹಬ್ಬ  ನಡೆಯುತ್ತದೆ. 

ಮಾವಿನ  ಎಲೆ, ಪಚ್ಚೆಕೊರಳು, ಬಿದಿರುಎಲೆ, ಮುಂತಾದವುಗಳ  ಜೊತೆಗೆ  ದಡ್ಡಲದ  ತೊಗಟೆನಾರಿನಿಂದ  ಬತ್ತದ ತೆನೆಯೊಂದಿಗೆ  ಕಟ್ಟಿದಾಗ  ಅದು  ‘ಕೊರಳ್ ‘ ಎನಿಸುತ್ತದೆ. ಮಾಂಗಲಿಕವಾದ  ಈ  ಕೊರಳ್ (ತೆನೆ) ಅನ್ನು  ದೇವರ  ಪೀಠ, ತೊಟ್ಟಿಲು, ಹಣದ  ಪೆಟ್ಟಿಗೆ, ಅಟ್ಟ, ಧಾನ್ಯಕಣಜ, ಮೊಸರು  ಕಡೆಯುವ  ಕಂಬ, ಭಾವಿ ಕಂಭ, ಭದ್ರಕಂಬ, ವಾಸ್ತು ಕಂಭ  ಮುಂತಾದೆಡೆ  ಕಟ್ಟಲಾಗುತ್ತದೆ. 

*.   ಕೊರಳ್ ಗೆ  ಬೇಕಾದ  ತೆನೆ, ಹಗ್ಗ, ಮಾವಿನಎಲೆ  ಮುಂತಾದ  ಸಾಮಗ್ರಿಗಳನ್ನು  ರೈತವರ್ಗದ  ಜನ  ತುಳಸಿಯ  ಬೃಂದಾವನದ  ಸನಿಹ  ಮಣೆಯಲ್ಲಿ  ತಂದಿಡುತ್ತಾರೆ.  ಮನೆ  ಯಜಮಾನನು  ಅಲಂಕೃತನಾಗಿ  ಮಣೆಯೊಂದಿಗೆ  ಆ 

ಪರಿಕರಗಳನ್ನು  ಮನೆಗೆ  ತುಂಬಿಸಿಕೊಳ್ಳುತ್ತಾನೆ.  ಪತ್ನಿ  ಕಾಲು  ತೊಳೆದು  ಬರಮಾಡಿಕೊಳ್ಳುತ್ತಾಳೆ.  ಕೊರಳಿನಲ್ಲಿ  ಧಾನ್ಯ ಲಕ್ಷ್ಮಿಯ  ಅನುಸಂಧಾನವಿದ್ದು  ಇದನ್ನು  ಕಟ್ಟಿದಾಗ  ಮನೆಯೆಲ್ಲಾ  ಅಲಂಕೃತವಾಗುತ್ತದೆ.   ಸುಮಂಗಲಿಗೆ   ಕುಂಕುಮವಿದ್ದಂತೆ ತೌಳವವಿಪ್ರನ  ಮನೆಯ ಕೊರಳ್. 

ಲೇಖಕರು:
ಡಾ । ಸತ್ಯನಾರಾಯಣ ಆಚಾರ್ಯ
ಪ್ರಾಂಶುಪಾಲರು ,
ಪೂರ್ಣ ಪ್ರಜ್ಞ ವಿದ್ಯಾಪೀಠ
ಬೆಂಗಳೂರು

ಸಂಗ್ರಹ:
ಸುಧಾ ಭಟ್ಟ್ , ಉಡುಪಿ

ಟೈಪಿಂಗ್:

ಸುಧಾ ಭಟ್ಟ್ , ಉಡುಪಿ

One thought on “ಕೊರಳ್ (ಕದಿರು) ಕಟ್ಟುವುದು    

Leave a Reply

Your email address will not be published.